ಜಗವೇ ಯೋಗಂ ಮಾಧುರ್ಯಂ

ವಿಶ್ವಾತ್ಮನ ಮಠ ಪೀಠಾರೋಹಿಣೆ
ಠೀವಿಯ ಠಾವಿನ ಶಾಂಭವಿಯೆ
ಶಕ್ತಾತ್ಮಳೆ ದಿಟ ಭಟರಾರಾಧನೆ
ಠಿಂ ಠಿಂ ಠೀವಿಯ ವೈಭವಿಯೆ

ಜಗದಂಬಾಂಬೆ ಮಾಯಾಂಗಾರಳೆ
ಉಡಿಯಲಿ ತುಂಬೌ ಮಕ್ಕಳನು
ಚಿದ್ಘನ ತೂರ್ಯೆ ಋಙ್ಞನ ಧಾರ್ಯೆ
ಅಪ್ಪೌ ಮುದ್ದಿನ ಸಿಸುಗಳನು

ನಿನ್ನಯ ಪದತಲ ಋಷಿತಲ ಶಿವನೆಲ
ಬಿತ್ತೌ ಬೆಳಸೌ ಚಿರಸೌಖ್ಯ
ಶಕ್ತಿಯ ಯುಕ್ತಿಯ ಚಿತ್ತಿನ ಚಂದ್ರಳೆ
ಜೀಕಿಸು ಚುಂಬಿಸು ಮಧುಸಖ್ಯ

ಏಕೌ ಹಡೆದಿಹೆ ಏಕೌ ಪಡೆದಿಹೆ
ಏಕೌ ಮರೆದಿಹೆ ಮಕ್ಕಳನು
ಸಾಕೌ ಕಾಡಿಕೆ ಬೇಕೌ ನೀಡಿಕೆ
ತಾರೌ ಸವಿಮೊಲೆ ಚಂದ್ರವನು

ನೀನೌ ಶಿವತನ ಸುಂದರ ಖುಷಿವನ
ಸತ್ಯಂ ನಿತ್ಯಂ ಸೌಂದರ್ಯ೦
ಶಿವಗುಣ ಗಾನಂ ನಿಜಗುಣ ತಾಣಂ
ಜಗವೇ ಯೋಗಂ ಮಾಧುರ್ಯಂ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆ.ಎಸ್. ನರಸಿಂಹಸ್ವಾಮಿ
Next post ಸ್ವಲ್ಪ ತಡಿ, ಮೋಡ ಹೋಗಲಿ, ಚಂದ್ರ ಬರುತ್ತಾನೆ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys